ರಾಜಕೀಯ

ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ (ರಿ.) ಬೆಳ್ಮಾರಿನಲ್ಲಿ ಸಾಮೂಹಿಕ ಗೋಪೂಜಾ ಕಾರ್ಯಕ್ರಮ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

Published

on

ಬೆಳ್ಮಾರು,ನ 20(Zoom Karnataka):ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ (ರಿ.) ಬೆಳ್ಮಾರು ಆರೂರು ಇದರ ವತಿಯಿಂದ ಇಂದು ದಿನಾಂಕ 19-11-2023 ರಂದು ಹಮ್ಮಿಕೊಳ್ಳಲಾದ “ಸಾಮೂಹಿಕ ಗೋಪೂಜಾ ಕಾರ್ಯಕ್ರಮ”ವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಬೈಲಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಮದನಂತೇಶ್ವರ ದೇವಸ್ಥಾನದ ಅರ್ಚಕರಾದ ವೇದವ್ಯಾಸ ಐತಾಳ, ಉಪ್ಪೂರು ಮಹತೋಭಾರ ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಭಟ್ ಬೆಳ್ಮಾರು, ಉಜ್ವಲ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಪಿ. ಶೆಟ್ಟಿ, ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುರುರಾಜ್ ಭಟ್, ಸಾಮಾಜಿಕ ಕಾರ್ಯಕರ್ತ ಗುರು ಪ್ರಸಾದ್ ಬೈಕಾಡಿ, ದಿಲೇಶ್ ಶೆಟ್ಟಿ, ಸುಂದರ ಪೂಜಾರಿ ಕೀಳಂಜೆ, ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ ನ ಸ್ಥಾಪಕ ಕಾರ್ಯದರ್ಶಿಗಳಾದ ಮಂಜುನಾಥ್ ಹೆಬ್ಬಾರ್, ನ್ಯಾಯವಾದಿಗಳಾದ ಗುರುರಾಜ್ ಐತಾಳ್, ಪುಣ್ಯಕೋಟಿ ಗೋ ಪೂಜಾ ಸಮಿತಿ ಅಧ್ಯಕ್ಷರಾದ ರಾಜೀವ ಕುಲಾಲ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Trending

Exit mobile version