ರಾಜಕೀಯ

ತುಳುನಾಡಿನ ಕಾರಣಿಕ ದೈವವಾದ ಕೊರಗಜ್ಜನ ಗುಡಿಗೇ ಬೆಂಕಿ ಇಟ್ಟ ಸ್ಥಳೀಯ ವ್ಯಕ್ತಿ

Published

on

ವೇಣೂರು ಜು 11 (Zoom Karnataka): ಅನಾದಿ ಕಾಲದಿಂದಲೂ ಸಾರ್ವಜನಿಕರು ಅತ್ಯಂತ ಶ್ರದ್ದೆ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದ ಬಜಿರೆ ಗ್ರಾಮದ ಬಾಡಾರು ಕೊರಗಲ್ಲು ಕೊರಗಜ್ಜನ ಗುಡಿಗೆ ಕಿಡಿಗೇಡಿಗಳು ಬೆಂಕಿ ನೀಡಿದ ಘಟನೆ ಇಂದು ನಡೆದಿದೆ.

ಜನವರಿ 5 ರಂದು ವರ್ಷಂಪ್ರತಿ ಬಾಡಾರುವಿನಲ್ಲಿ ದೊಂಪದಬಲಿ ಉತ್ಸವ ನಡೆದ ಮರುದಿನ ಕೊರಗಜ್ಜನ ಗುಡಿಯಲ್ಲಿ ಕೊರಗಜ್ಜನಿಗೆ ಸಾರ್ವಜನಿಕವಾಗಿ ನೇಮೋತ್ಸವ ನಡೆಯುತ್ತ ಬರುತ್ತಿದ್ದು ಇತ್ತಿಚೇಗೆ ಕೊರಗಜ್ಜನ ಪರಿಚಾರಕರು ಹಾಗೂ ಭಕ್ತರಿಗೆ ಗುಡಿಯ ವಿಚಾರದಲ್ಲಿ ವೈಮನಸ್ಸು ಉಂಟಾಗಿದೆ ಎನ್ನಲಾಗಿದೆ.

ಇದೀಗ ಗುಡಿಗೆ ಬೆಂಕಿ ಕೊಟ್ಟಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ಗೊತ್ತಾಗಬೇಕಿದೆ.

Leave a Reply

Your email address will not be published. Required fields are marked *

Trending

Exit mobile version