ತಾಜಾ ಸುದ್ದಿ

ಉಪ್ಪಿನಂಗಡಿ: ಪಂಪಿನ ವಿದ್ಯುತ್ ಸ್ಪರ್ಶಿಸಿ ಯುವಕ ಮೃತ

Published

on

ಉಪ್ಪಿನಂಗಡಿ, ಮೇ 23: ನದಿಗೆ ಅಳವಡಿಸಲಾದ ಪಂಪಿನ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ನ ಕುಮಾರಧಾರ ನದಿ ತೀರದಲ್ಲಿ ನಡೆದಿದೆ.

ಮೃತ ಯುವಕನನ್ನು ಶರೀಪುದ್ದೀನ್ (19) ಎಂದು ಗುರುತಿಸಲಾಗಿದೆ. ದ್ವಿತೀಯ ಪಿಯುಸಿ ಉತ್ತೀರ್ಣನಾಗಿದ್ದ ಈತ ತನ್ನ ತಾಯಿಯೊಂದಿಗೆ ಮಾವನ ಮನೆಗೆ ಬಂದಿದ್ದ ವೇಳೆ ಘಟನೆ ನಡೆದಿದೆ.

ಈ ಬಗ್ಗೆ ಮೃತದ ಮಾವ ಬಿ. ಹಮ್ಮಬ್ಬ ಎಂಬವರು ಉಪ್ಪಿನಂಗಡಿ ಪೊಲೀಶರಿಗೆ ದೂರು ನೀಡಿದ್ದ, ನನ್ನ ತಂಗಿ ಹಾಗೂ ಆಕೆಯ ಮಗ ಶರೀಪುದ್ದೀನ್ ನನ್ನ ಮನೆಯಲ್ಲಿದ್ದು , ಭಾನುವಾರ ಸಾಯಂಕಾಲ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ನ ಕುಮಾರಧಾರ ನದಿ ಕಿನಾರೆ ಬಳಿ ಅಳವಡಿಸಲಾದ ಪಂಪಿನ ವಿದ್ಯುತ್ ಸ್ಪರ್ಶವಾಗಿದ್ದು, ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ.

ನದಿ ದಡಕ್ಕೆ ಹೋಗಿದ್ದ ವೇಳೆ ನೀರಿಗೆ ಜಾರಿದ ಶರೀಪುದ್ದೀನ್ ರಕ್ಷಣೆಗಾಗಿ ಕೈಗೆ ಸಿಕ್ಕಿದ್ದ ಪಂಪಿಗೆ ಅಳವಡಿಸಲಾದ ವಿದ್ಯುತ್ ತಂತಿಯನ್ನೇ ಹಿಡಿಯುವ ವೇಳೆ ವಿದ್ಯುತ್ ಪ್ರವಹಿಸಿದೆ ಎಂದು ಅಂದಾಜಿಸಲಾಗಿದ್ದು ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

Trending

Exit mobile version