Connect with us

ಕ್ರಿಕೆಟ್ ನ್ಯೂಸ್

ಬಡ ಯುವಕನ ಬಾಳಿಗೆ ಬೆಳಕಾದ ಖ್ಯಾತ ಕ್ರಿಕೆಟರ್ ಕೆ.ಎಲ್ ರಾಹುಲ್

Published

on

ಬಡ ಯುವಕನ ಬಾಳಿಗೆ ಬೆಳಕಾದ ಖ್ಯಾತ ಕ್ರಿಕೆಟರ್ ಕೆ.ಎಲ್ ರಾಹುಲ್

ಹುಬ್ಬಳ್ಳಿ,ಜೂ 12(Zoom Karnataka)
ಕೋಟಿ ಕೋಟಿ ಹಣ ಇದ್ದರೂ ದಾನ ಮಾಡದೇ ಕೂಡಿಟ್ಟುಕೊಳ್ಳುವ ಜನರೇ ಹೆಚ್ಚು. ಅಂತಹದರಲ್ಲಿ ದಾನ ಮಾಡುವ ಹೃದಯವಂತ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ನಮ್ಮ ಕನ್ನಡದ ಹೆಮ್ಮೆಯ ಪುತ್ರನಿಂದ ಯುವಕನೋರ್ವನ ಕಷ್ಟದ ಬದುಕಿನ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ. ಹುಬ್ಬಳ್ಳಿಯ ಯುವಕರ ಸಹಾಯದಿಂದ ಮಹತ್ವದ ಕಾರ್ಯ ಸಾಧನೆಯಾಗಿದೆ.

ವಿದ್ಯಾರ್ಥಿಗೆ ನೆರವಾದ ಕೆ ಎಲ್ ರಾಹುಲ್​

ಕೆ.ಎಲ್. ರಾಹುಲ್ ನಮ್ಮ ಕರ್ನಾಟಕದ ಯುವಕ. ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ, ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್.ರಾಹುಲ್ ಅವರು ವಿದ್ಯಾರ್ಥಿಯೊಬ್ಬನಿಗೆ ಆರ್ಥಿಕ ನೆರವು ನೀಡುವ ಮೂಲಕ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.

ಯುವಕನ ಶಿಕ್ಷಣಕ್ಕೆ ಆರ್ಥಿಕ ನೆರವು

ಅಮೃತ ಮಾವಿನಕಟ್ಟಿ ಎಂಬುವ ಮಹಾಲಿಂಗಪುರದ ಸಾಮಾನ್ಯ ಯುವಕ ಮೊನ್ನೆಯಷ್ಟೇ ಸೆಕೆಂಡ್ ಪಿಯುಸಿ ಕಾಮರ್ಸ್ ನಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದ. ಆದರೆ, ಕಡುಬಡತನದಲ್ಲಿರುವ ಈ ಯುವಕನಿಗೆ ತಂದೆ ತಾಯಿ ಇಲ್ಲಾ. ಓದಲೇ ಬೇಕು ಎಂಬ ಛಲದ ಯುವಕನಿಗೆ ನಿತೀನ್ ಹಾಗೂ ಹುಬ್ಬಳ್ಳಿಯ ಮಂಜುನಾಥ ಹೆಬಸೂರ ಎಂಬುವವರು ಭೇಟಿಯಾಗಿದ್ದಾರೆ. ಅದೃಷ್ಟವಶಾತ್ ಮಂಜುನಾಥ ಹೆಬಸೂರ ಅವರು ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ ಅವರೊಂದಿಗೆ ಮಾತನಾಡಿ, ಯುವಕನ ಶಿಕ್ಷಣಕ್ಕೆ ಆರ್ಥಿಕ ನೆರವು ಕೊಡಿಸಿದ್ದಾರೆ.

ಯುವಕನ ಬಾಳಿಗೆ ಬೆಳಕಾದ ಕ್ರಿಕೆಟರ್​

ಇನ್ನೂ ಯುವಕ ಬಿಕಾಂ ಓದಲು ಕೆಎಲ್ಇ ಸಂಸ್ಥೆಯ ಬಿವಿಬಿ ಕಾಲೇಜಿಗೆ ಬಂದಿದ್ದಾನೆ. ಆತನ ಪರಿಸ್ಥಿತಿ ಹಾಗೂ ಆತನ ಅಂಕಗಳನ್ನು ನೋಡಿದ ಆಡಳಿತ ಮಂಡಳಿ 10 ಸಾವಿರ ರಿಯಾಯಿತಿ ನೀಡಿದೆ. ಆದರೆ, ಉಳಿದ ಹಣವನ್ನು ತುಂಬಲು ಸಾಧ್ಯವಾಗದೇ ಇದ್ದಾಗ ಕೆ.ಎಲ್.ರಾಹುಲ್ 75 ಸಾವಿರ ಹಣವನ್ನು ಯುವಕನ ಖಾತೆಗೆ ಜಮಾ ಮಾಡಿದ್ದು, ಯುವಕನ ಭವಿಷ್ಯಕ್ಕೆ ಬೆಳಕಾಗಿದ್ದಾರೆ.

ಒಟ್ಟಿನಲ್ಲಿ ಯುವಕನ ನೆರವಿಗೆ ಹುಬ್ಬಳ್ಳಿಯ ಮಂಜುನಾಥ ಹೆಬಸೂರ ಸಾಕಷ್ಟು ಶ್ರಮ ವಹಿಸಿದ್ದು, ಕೆ.ಎಲ್ ರಾಹುಲ್ ಮೂಲಕ ಯುವಕನ ಬದುಕಿಗೆ ಹೊಸ ಅರ್ಥ ಕಲ್ಪಿಸಿದ್ದಾರೆ. ಅಷ್ಟೇ ಅಲ್ಲದೇ ಕಷ್ಟದಲ್ಲಿದ್ದ ಯುವಕನ ಶಿಕ್ಷಣಕ್ಕೆ ಸಹಾಯ ಮಾಡಿದ ಕೆ ಎಲ್ ರಾಹುಲ್ ಅವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading