Connect with us

ಮನೋರಂಜನೆ

ಛತ್ರಪತಿ ಶಿವಾಜಿ ಜೀವನ ಆಧರಿಸಿದ ಸಿನಿಮಾದಲ್ಲಿ ರಿಷಬ್ ಶೆಟ್ಟಿ

Published

on

‘ಕಾಂತಾರ’ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಅವರಿಗೆ ಹಲವು ಭಾಷೆಗಳಿಂದ ಒಳ್ಳೆಯ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಛತ್ರಪತಿ ಶಿವಾಜಿ ಜೀವನ ಆಧರಿಸಿದ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾವನ್ನು ಬಾಲಿವುಡ್​ನ ಖ್ಯಾತ ನಿರ್ಮಾಪಕ ನಿರ್ಮಿಸಲಿದ್ದಾರೆ.

ಕಾಂತಾರ’ ಸಿನಿಮಾ ರಿಷಬ್ ಶೆಟ್ಟಿಗೆ ಹಲವು ಅವಕಾಶಗಳ ಬಾಗಿಲುಗಳನ್ನು ತೆರೆದಿದೆ, ತೆರೆಯುತ್ತಲೇ ಇದೆ. ‘ಕಾಂತಾರ’ ಸಿನಿಮಾದಿಂದಾಗಿ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಲವು ಭಾರಿ ಬಜೆಟ್ ಸಿನಿಮಾ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ನೆರೆಯ ಚಿತ್ರರಂಗದ ನಿರ್ದೇಶಕ, ನಿರ್ಮಾಪಕರು ರಿಷಬ್ ಶೆಟ್ಟಿಯವರಿಗಾಗಿ ಪಾತ್ರಗಳನ್ನು ಬರೆಯುತ್ತಿದ್ದಾರೆ. ಈಗಾಗಲೇ ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಐತಿಹಾಸಿಕ ವ್ಯಕ್ತಿಯ ಕತೆಯುಳ್ಳ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ರಿಷಬ್ ಎಸ್ ಹೇಳಿದ್ದಾರೆ.

ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸಂದೀಪ್ ಸಿಂಗ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಮಿಂಚುತ್ತಿದ್ದಾರೆ. ಸಿನಿಮಾಕ್ಕೆ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಎಂದು ಹೆಸರಿಡಲಾಗಿದೆ.

ಸಿನಿಮಾ ಬಗ್ಗೆ ಮಾತನಾಡಿರುವ ರಿಷಬ್ ಶೆಟ್ಟಿ, ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾವನ್ನು ಅವರು ನಿರ್ದೇಶಕ ಸಂದೀಪ್ ಸಿಂಗ್ ಊಹಿಸಿರುವ ರೀತಿ ಅದ್ಭುತವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ ಅದೆಷ್ಟು ಅದ್ಭುತವಾದುದು ಎಂದರೆ ಕತೆ ಕೇಳಿದ ಕ್ಷಣ ಕಾಲವೂ ಯೋಚಿಸದೆ ಒಪಪಿಕೊಂಡುಬಿಟ್ಟೆ. ಛತ್ರಪತಿ ಶಿವಾಜಿಯವರ ಪಾತ್ರದಲ್ಲಿ ನಟಿಸುವುದು ಪದಗಳಿಗೆ ಮೀರಿದ ಗೌರವ. ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರೀಯ ಹೀರೋ, ಶತಮಾನಗಳ ಕಾಲ ಅವರು ಪ್ರಭಾವ ಬೀರಿದ್ದಾರೆ. ಅಂಥಹಾ ಅದ್ಭುತವಾದ ನಾಯಕನ ಪಾತ್ರಕ್ಕೆ ಜೀವ ತುಂಬುತ್ತಿರುವುದು ನನಗೆ ದೊರಕಿದ ಅಭೂತಪೂರ್ವ ಅವಕಾಶ ಮತ್ತು ಗೌರವ’ ಎಂದಿದ್ದಾರೆ ರಿಷಬ್.

ಸಿನಿಮಾದ ನಿರ್ದೇಶಕ ಸಂದೀಪ್ ಸಿಂಗ್ ಮಾತನಾಡಿ, ‘ಛತ್ರಪತಿ ಶಿವಾಜಿ ಪಾತ್ರಕ್ಕೆ ರಿಷಬ್ ಶೆಟ್ಟಿ ನನ್ನ ಏಕೈಕ ಆಯ್ಕೆ ಆಗಿದ್ದರು. ಅವರನ್ನು ಹೊರತು ಇನ್ಯಾರನ್ನೂ ಆ ಪಾತ್ರಕ್ಕೆ ಕಲ್ಪನೆ ಸಹ ಮಾಡಿಕೊಂಡಿಲ್ಲ ನಾನು. ಈ ಸಿನಿಮಾ ನಿರ್ದೇಶನ ಮಾಡುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ತೆರೆಯ ಮೇಲೆ ತರುವುದು ನನ್ನ ಪಾಲಿಗೆ ಅತ್ಯಂತ ಮಹತ್ತರವಾದುದು ಮತ್ತು ಗೌರವಪೂರ್ವಕವಾದುದು, ಸಿನಿಮಾದ ತಂತ್ರಜ್ಞಾನ, ಭಾರತೀಯ ಸಿನಿಮಾರಂಗವನ್ನು ವಿಶ್ವದರ್ಜೆಗೆ ಏರಿಸುವಂತಿರಲಿದೆ’ ಎಂದಿದ್ದಾರೆ.

‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ 2027 ಜನವರಿ 21 ಕ್ಕೆ ವಿಶ್ವಮಟ್ಟದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ನಿರ್ದೇಶಕ ಸಂದೀಪ್ ಸಿಂಗ್ ಈ ಹಿಂದೆ ಅಕ್ಷಯ್ ಕುಮಾರ್ ನಟನೆಯ ‘ರೌಡಿ ರಾಥೋಡ್’, ದೀಪಿಕಾ-ರಣ್ವೀರ್ ನಟನೆಯ ‘ರಾಮ್ ಲೀಲಾ’, ಪ್ರಿಯಾಂಕಾ ನಟನೆಯ ‘ಮೇರಿ ಕೋಮ್’ ಸಿನಿಮಾಗಳ ಸಹ ನಿರ್ಮಾಣ ಮಾಡಿದ್ದಾರೆ. ಅದಾದ ಬಳಿಕ ಐಶ್ವರ್ಯಾ ರೈ ನಟನೆಯ ‘ಸರಬ್ಜೀತ್’, ಅಮಿತಾಬ್ ಬಚ್ಚನ್ ನಟನೆಯ ‘ಝುಂಡ್’, ‘ಪಿಎಂ ನರೇಂದ್ರ ಮೋದಿ’, ‘ಮೇ ಅಟಲ್ ಹೂ’ ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾವನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಲಿದ್ದಾರೆ.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading