Connect with us

ತಾಜಾ ಸುದ್ದಿ

ರಾತ್ರಿ 8 ರಿಂದ 10 ರವರೆಗೆ ಸುಡುಮದ್ದು ಸಿಡಿಸಲು ಅವಕಾಶ- ಸರ್ಕಾರದಿಂದ ಮಾರ್ಗಸೂಚಿ

Published

on

ಬೆಂಗಳೂರು, ನ 03 (Zoom Karnataka): ದೀಪಾವಳಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಿದ್ದು, ದಿನಕ್ಕೆ 2 ಗಂಟೆ ಮಾತ್ರ ಸುಡುಮದ್ದು ಸಿಡಿಸಲು ಅವಕಾಶ ನೀಡಲಾಗಿದೆ.ರಾಜ್ಯಾದ್ಯಂತ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದ್ದು, ಉಳಿದ ಸಮಯದಲ್ಲಿ ಸುಡುಮದ್ದು ಸಿಡಿಸಲು ಅವಕಾಶವಿಲ್ಲ ಎಂದು ಮಾರ್ಗಸೂಚಿ ಹೊರಡಿಸಿದೆ.

ಕಳೆದ ತಿಂಗಳು ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಸುತ್ತೋಲೆ ಹೊರಡಿಸಿದ್ದು ಅದರಂತೆಯೇ ಪೌರಾಡಳಿತ ನಿರ್ದೇಶನಾಲಯ ಹೊರಡಿಸಿದ ಆದೇಶದ ಅನುಸಾರ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದ್ದು ಉಳಿದ ಅವಧಿಯಲ್ಲಿ ನಿಷೇಧ ಹೇರಲಾಗಿದೆ.

ಹಬ್ಬ ದ ಆಚರಣೆ ವೇಳೆ ನಿಗದಿತ ಗುಣ ಮಾಪನಗಳಿಗೆ ಸರಿಹೊಂದುವ ಹಸಿರು ಪಟಾಕಿಗಳನ್ನು ಮಾತ್ರ
ಬಳಸಬೇಕು. ಯಾವುದೇ ಪ್ರಾಣಿ-ಪಕ್ಷಿ , ಮಕ್ಕಳು, ವೃದ್ಧ ರಿಗೆ ತೊಂದರೆಯಾಗದಂತೆ ಗಮನಿಸಬೇಕು. ಆಸ್ಪ ತ್ರೆ , ಶಿಕ್ಷಣ ಸಂಸ್ಥೆ , ನಿಷೇಧಿತ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ ಎಂದು ಹೇಳಲಾಗಿದೆ.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading