ಬೆಂಗಳೂರು ಜೂ 21(Zoom Karnataka): ಫೇಸ್ಬುಕ್ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ವಾಕ್ ಸ್ವಾತಂತ್ರ್ಯದ ಮೇಲೆ ಹಿಟ್ಲರ್ ಸರ್ಕಾರ ದಾಳಿ ಎಂದು ಬರೆದು ಕೆಂಡಕಾರಿದೆ.
ಶಹಬ್ಬಾಸ್ ಹಿಟ್ಲರ್ ಸರ್ಕಾರ. ಉಚಿತ ಬಸ್ ಪ್ರಯಾಣ ವೈಫಲ್ಯ ಸರ್ಕಾರಕ್ಕಿಲ್ಲ ತಲೆ ಬಿಸಿ. ದರ ಏರಿಕೆಗೂ ಡೋಂಟ್ ಕೇರ್. ಅನ್ನಭಾಗ್ಯ ಕೊಡಲು ಡೋಂಗಿತನ. ಗ್ಯಾರಂಟಿಗಳ ಬದಲು ಕಿವಿ ಮೇಲೆ ಹೂ ಇಡಲು ನಿರ್ಧಾರ. ಸರ್ಕಾರದ ಜನವಿರೋಧಿ ನಿಲುವುಗಳ ವಿರುದ್ಧ ಸೊಲ್ಲೆತ್ತಿದರೆ ಮೊದಲು ಬಂಧನ. ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ ತುಘಲಕ್ ಆಡಳಿತ ಬಹಳ ದಿನ ನಡೆಯುವುದಿಲ್ಲ ಎಚ್ಚರ ಎಂದು ಟ್ವೀಟ್ ಮಾಡಿದೆ.
ಬಾಳೆಹೊನ್ನೂರು ರೇಣುಕಾನಗರ ಮಠ ರಸ್ತೆಯ ಅವಿನಾಶ್ಗೌಡ ಮಲ್ನಾಡ್ ಎಂಬಾತ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳಕಾರಿ ಪೋಸ್ಟ್ ಹಾಕಿದ್ದರು. ಇದರ ವಿರುದ್ಧ ಬಾಳೆಹೊನ್ನೂರು ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಎಂಬುವರು ದೂರು ನೀಡಿದ್ದರು. ಇವರ ದೂರಿನ ಆಧಾರದ ಮೇರೆಗೆ ವ್ಯಕ್ತಿಯನ್ನು ಬಂಧಿಸಲಾಗಿದೆ.